Saturday, March 28, 2009
ನಿರಂತರ ಯಕ್ಷಗಾನ ಮೇಳಗಳು
ಯಕ್ಷಗಾನ ಮೇಳಗಳು ಮೊದಲಿನಷ್ಟು ಇಲ್ಲದಿದ್ದರೂ ಬಹಳಷ್ಟು ಮೇಳಗಳು ಇಂದು ಚಾಲ್ತಿಯಲ್ಲಿವೇ. ವೃತ್ತಿ ಮೇಳಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಸ್ಪಷ್ಟ. ಆದರೆ ಹರಕೆ ಮೇಳಗಳೂ ಗಣನೀಯವಾಗಿ ಹರಕೆಯನ್ನು ಸಲ್ಲಿಸುತ್ತಲೆ ಇವೆ.
ಸಾಲಿಗ್ರಾಮ ಮತ್ತು ಪೆರ್ಡೂರು ಮೇಳಗಳು ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರಕನ್ನಡದಲ್ಲಿ ತಿರುಗಾಟ ಮಾಡುತ್ತಿವೆ. ಹರಕೆ ಮೇಳಗಳು ಉತ್ತರಕನ್ನಡಕ್ಕೆ ಬರುತ್ತಿಲ್ಲ. ಆದರೆ ಉತ್ತರಕನ್ನಡದ ಕರಾವಳಿ ಭಾಗದಲ್ಲಿ ಕರ್ಕಿಮೇಳ, ಕೆರೆಮನೆ ಮೇಳ ಮತ್ತು ಚಿಟ್ಟಾಣಿ ನೇತ್ರತ್ವದ ಕಾಲಮೀತಯ ಮೇಳಗಳೂ ಆಟವಾಡುತ್ತಿವೆ.
ಯಕ್ಷಗಾನ ಲೋಕದಲ್ಲಿ ಪ್ರತಿ ದಿನ ಆಟವಾಡುವ ಮೇಳಗಳ ಯಾದಿ ಒಡ್ಡೋಲಗಕ್ಕಾಗಿ. . . . . . . . . .
· ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕ್ರಪಾಪೋಷಿತ ಯಕ್ಷಗಾನ ಮಂಡಳಿ- ಧರ್ಮಸ್ಥಳ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ ಮಾರ್ಗದರ್ಶನ ಮತ್ತು ಆಶ್ರಯದಲ್ಲಿ ನಡೆಯುತ್ತಿದೆ.
· ಶ್ರೀ ಸಾಲಿಗ್ರಾಮ ಮೇಳ, ಮಂಗಳಾದೇವಿ ಮೇಳ, ಶ್ರೀ ಸೌಕೂರು ಮೇಳ, ಶ್ರೀ ಹಾಲಾಡಿ ಮೇಳ, ಶ್ರೀ ಹಿರಿಯಡ್ಕ ಮೇಳ- ಈ ಐದು ಮೇಳಗಳೂ ಬೈಲೂರು ಪಿ. ಕಿಶನ್ ಹೆಗ್ಡೆ ಅವರು ನಡೆಸುತ್ತಿದ್ದಾರೆ.
· ಶ್ರೀ ಪೆರ್ಡೂರು ಮೇಳ- ಇದು ಕರಣಾಕರ ಶೆಟ್ಟಿ ಅವರ ಯಜಮಾನಿಕೆಯಲ್ಲಿ ನಡೆಯುತ್ತಿದೆ.
· ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳ ಈ ಹೆಸರಿನಡಿಯಲ್ಲಿ ನಾಲ್ಕು ಮೇಳಗಳು ನಡೆಯುತ್ತಿವೆ. ಇವು ಹರಕೆ ಬಯಲಾಟ ಮೇಳಗಳು.
· ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ನಾಲ್ಕು ಮೇಳಗಳನ್ನು ನಡೆಸುತ್ತದೆ. ಇವು ಹರಕೆ ಮೇಳಗಳು.
· ಶ್ರೀ ಹೊಸನಗರ ಮೇಳ ಶ್ರೀರಾಮಚಂದ್ರಪುರ ಮಠದ ಮೇಲ ಇದಾಗಿದ್ದು ಹೆಚ್ಚಾಗಿ ಕಾಲಮಿತಿಯ ಪ್ರಯೋಗವನ್ನು ನಡೆಸುತ್ತದೆ. ಇದು ಕೂಡಾ ಬಯಲಾಟದ ಮತ್ತು ಹರಿಕೆ ಆಟವನ್ನು ಆಡುವ ಮೇಳವಾಗಿದೆ.
· ಶ್ರೀಮಾರಣಕಟ್ಟೆ ಮೇಳ ಎರಡು ಮೇಳವನ್ನು ನಡೆಸುತ್ತಿದ್ದು, ಇದು ಹರಿಕೆ ಆಟವನ್ನು ಆಡುವ ಮೇಳವಾಗಿದೆ.
· ಗೋಳಿಗರಡಿ ಮೇಳ, ಉಳ್ಳಾಲ ಶ್ರೀ ಭಗವತಿ ಮೇಳ,ಶ್ರೀಕ್ಷೇತ್ರ ಬಗ್ವಾಡಿ ಮೇಳ, ಶ್ರೀ ಚೋನಮನೆಶನಿಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ, ಮಡಾಮಕ್ಕಿ ಮೇಳ, ಕಮಲಶಿಲೆ ಮೇಳ, ಶ್ರೀಕ್ಷೆತ್ರ ಸಿಗಂದೂರು ಮೇಳ, ಸುಂಕದಕಟ್ಟೆ ಮೇಳ, ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ ಎಡನೀರು.
· ಇದಲ್ಲದೇ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಗುಂಡಬಾಳ ದೇವಸ್ಥಾನದಲ್ಲಿ ವರ್ಷದ ಆರು ತಿಂಗಳವೂ, ಒಂದೇ ಸ್ಥಳದಲ್ಲಿ ಯಕ್ಷಗಾನ ನಡೆಯುತ್ತಿರುತ್ತದೆ.
ಇವಿಷ್ಟು ಮೇಳಗಳು ಆರು ತಿಂಗಳ ಕಾಲ ನಿರಂತರ ಯಕ್ಷಗಾನವನ್ನು ಆಡುತ್ತಿವೆ. ನೋಡುಗರ ಸಂಖ್ಯೆ ಕಡಿಮೆಯಾಗಿರಬಹುದು. ಯಕ್ಷಗಾನ ತನ್ನ ತನವನ್ನು ಕಳೆದುಕೊಳ್ಳುತ್ತಿದೆ ಎನ್ನುವುದು ತಪ್ಪು. ಇರುವ 20 ಕ್ಕೂ ಅಧಿಕ ಮೇಳಗಳಲ್ಲಿ 15ರಷ್ಟು ಮೇಳಗಳು ಪೌರಾಣಿಕ ಪ್ರಸಂಗಗಳನ್ನೇ ಆಡುತ್ತಿವೆ.
ಇದಲ್ಲದೆ ಯಕ್ಷಗಾನ ಗಾಳಿ ಇರುವ ಜಿಲ್ಲೆಗಳ ಪ್ರತಿ ತಾಲೂಕಿನಲ್ಲಿ ಎರಡರಿಂದ ಮೂರು ಹವ್ಯಾಸಿ ಮೇಳಗಳು ಆಟ ಆಡುತ್ತಲೇ ಇರುತ್ತವೆ. ಊರಿನ ಸಮಾರಾದನೆ, ಸಣ್ಣ ಜಾತ್ರೆ ಹೀಗೆ ಪೌರಾಣಿಕ ಪ್ರಸಂಗಳು ಚಾಲ್ತಿಯಲ್ಲಿವೆ.
Sunday, March 22, 2009
ಗುರು ಸಂಜೀವರು
`ಉಡುಪಿ' ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಊರು. ಇಲ್ಲಿ ಕಲೆಗೆ ಅವಕಾಶ ಜಾಸ್ತಿ. ಕಲಿಯುವುದಕ್ಕೂ ಅವಕಾಶ ಇದೆ. ಯಕ್ಷಗಾನಕ್ಕೆ ಹೆಚ್ಚಿನ ಅವಕಾಶ ಇಲ್ಲಿ. ಯಕ್ಷಗಾನ ತರಬೇತಿ ನೀಡುವುದಕ್ಕೆ ಪ್ರಥಮವಾಗಿ ವ್ಯಸ್ಥಿತ ರೀತಿಯಲ್ಲಿ ಶಾಲೆಯೊಂದು ಪ್ರಾರಂಭವಾದದ್ದು ಇಲ್ಲಿಯೇ. ಹಿಂದ ಎಬಹಳಷ್ಟು ಮಂದಿ ಶ್ರೇಷ್ಠ ಗುರುಗಳು ಇಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯದಲ್ಲಿ `ಬನ್ನಂಜೆ ಸಂಜೀವ ಸುವರ್ಣ' ಇಲ್ಲಿ ನೃತ್ಯಗುರು.
ಯಕ್ಕಗಾನದ ನೃತ್ಯದ ಬಗ್ಗೆ ಇವರಷ್ಟು ಶಾಸ್ತ್ರೀಯವಾಗಿ ಪ್ರಯೋಗ ಮಾಡಿದವರು ಯಾರು ಇರಲಿಕ್ಕಿಲ್ಲ. ಗುರು ಸಂಜೀವರು ಉಡುಪಿಗೆ ತಾಗಿ ಕೊಂಡಿರುವ ಬನ್ನಂಜೆಯಲ್ಲಿ ಹುಟ್ಟಿದವರು. ನೆಲದ ಪ್ರಭಾವವಿರಬೇಕು. ಚಿಕ್ಕಂದಿನಿಂದಲೇ ಯಕ್ಷಗಾನದ ಆಸಕ್ತಿ. ಬಡತನದ ಅನಿವಾರ್ಯತೆ ಗ್ಯಾರಜ್ ಕೆಲಸಕ್ಕೆ ಹೋಗುವಂತೆ ಮಾಡಿತು. ಆದರೆ ಯಕ್ಷಗಾನದ ಚಟ ಇವರನ್ನು ರಾತ್ರಿ ಸಮಯದಲ್ಲಿ ಹೋಗಿ ಯಕ್ಷಗಾನವನ್ನು ಕಲಿಯುವಂತೆ ಮಾಡಿತು.
ಯಕ್ಷಗಾನವನ್ನು ಕಲಿತ ಮೇಲೆ ಎಲ್ಲರಂತೆ ಇವರು ಮೇಳ ಸೇರಿದರು. ಅನುಭವ ಸಾಲದು ಎನ್ನುವ ಮನೋಭಾವ ಬಂತೋ. ಅಥವಾ ಇವರಿಗಿರುವ ಕ್ರಿಯೇಟಿವಿಟಿ ಅಲ್ಲಿರಲು ಕೊಡಲಿಲ್ಲವೇನೋ?. ಮತ್ತೆ ಗುರುಗಳನ್ನು ಅರಸಿ ಹೊರಟರು. ಮುರ್ಗೋಳಿ ಗೋವಿಂದ ಶೇರುಗಾರ, ವೀರಭದ್ರ ನಾಯಕ ಮುಂತಾದ ಹದಿನಾರಕ್ಕೂ ಹೆಚ್ಚು ಕಲಾವಿದರಲ್ಲಿ ವಿವಿಧ ನಮೂನೆಯ ನೃತ್ಯವನ್ನು ಅಭ್ಯಾಸ ಮಾಡಿದರು. ನಂತರ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿ ತಾವು ಕಲಿತ ಕಲೆಯನ್ನು ಜಿಪಿಣತನವಿಲ್ಲದೇ ಕಲಿಸ ತೊಡಗಿದರು.
ಗುರುಗಳು ಮಹಾ ಸ್ಟ್ರಿಕ್ಟ್. ಕುಣಿತ ಮಾಡುವಾಗ ತಾಳ್ಮೆಯಿಂದ ಹೇಳಿ ಕೊಡುತ್ತಾರೆ. ಹತ್ತು ಬಾರಿ ಹೇಳಿಕೊಟ್ಟರೂ ಬರದಿದ್ದರೆ, ಅವರ ಕೈಲ್ಲಿರುವ ಬಿಲ್ಲು ಮಾತನಾಡುತ್ತದೆ. ಪೆಟ್ಟು ಗ್ಯಾರಂಟಿ. ಒಮ್ಮೆ ಇವರ ಹತ್ತಿರ ಕಲಿತರೆ ಕುಣಿತ ಮತ್ತೆ ಮರೆಯುದಿಲ್ಲ.
ಕಾರಂತರ ಒಡನಾಡಿಗಳಾಗಿ ಅವರ ರೂಪಕಗಳಿಗೆ ರೂಪವನ್ನು ನೀಡಿದ ಅನುಭವ ಇವರದ್ದು. ಉತ್ತಮ ನಿರ್ದೇಶಕ ಇವರು. ಹಲವಾರು ಯಕ್ಷಗಾನ ಪ್ರಸಂಗಗಳನ್ನು ಹೊಸ ಕಲ್ಪನೆಯಲ್ಲಿ ನಿರ್ದೇಶಿಸಿ ಯಶಸ್ವಿಯಾಗಿ ಪ್ರದರ್ಶನ ಗೊಂಡಿದೆ.
ಗುರುಗಳ ಶಿಷ್ಯಂದಿರ ಬಳಗದಲ್ಲಿ ವಕೀಲರು. ವೈದ್ಯರು, ವಿದೇಶೀಯರು ಎಲ್ಲರು ಇದ್ದಾರೆ. ಯಕ್ಷಗಾನವನ್ನು ಆರಾದನೆ ಎಂದು ತಿಳಿರುವ ಸಂಜೀವ ಗುರುಗಳಿಗೆ ಅವರ ಅಸಂಖ್ಯಾತ ಶಿಷ್ಯಂದಿರಲ್ಲಿ ಒಬ್ಬನಾದ ನನ್ನ ನುಡಿ ನಮನ.
ಯಕ್ಕಗಾನದ ನೃತ್ಯದ ಬಗ್ಗೆ ಇವರಷ್ಟು ಶಾಸ್ತ್ರೀಯವಾಗಿ ಪ್ರಯೋಗ ಮಾಡಿದವರು ಯಾರು ಇರಲಿಕ್ಕಿಲ್ಲ. ಗುರು ಸಂಜೀವರು ಉಡುಪಿಗೆ ತಾಗಿ ಕೊಂಡಿರುವ ಬನ್ನಂಜೆಯಲ್ಲಿ ಹುಟ್ಟಿದವರು. ನೆಲದ ಪ್ರಭಾವವಿರಬೇಕು. ಚಿಕ್ಕಂದಿನಿಂದಲೇ ಯಕ್ಷಗಾನದ ಆಸಕ್ತಿ. ಬಡತನದ ಅನಿವಾರ್ಯತೆ ಗ್ಯಾರಜ್ ಕೆಲಸಕ್ಕೆ ಹೋಗುವಂತೆ ಮಾಡಿತು. ಆದರೆ ಯಕ್ಷಗಾನದ ಚಟ ಇವರನ್ನು ರಾತ್ರಿ ಸಮಯದಲ್ಲಿ ಹೋಗಿ ಯಕ್ಷಗಾನವನ್ನು ಕಲಿಯುವಂತೆ ಮಾಡಿತು.
ಯಕ್ಷಗಾನವನ್ನು ಕಲಿತ ಮೇಲೆ ಎಲ್ಲರಂತೆ ಇವರು ಮೇಳ ಸೇರಿದರು. ಅನುಭವ ಸಾಲದು ಎನ್ನುವ ಮನೋಭಾವ ಬಂತೋ. ಅಥವಾ ಇವರಿಗಿರುವ ಕ್ರಿಯೇಟಿವಿಟಿ ಅಲ್ಲಿರಲು ಕೊಡಲಿಲ್ಲವೇನೋ?. ಮತ್ತೆ ಗುರುಗಳನ್ನು ಅರಸಿ ಹೊರಟರು. ಮುರ್ಗೋಳಿ ಗೋವಿಂದ ಶೇರುಗಾರ, ವೀರಭದ್ರ ನಾಯಕ ಮುಂತಾದ ಹದಿನಾರಕ್ಕೂ ಹೆಚ್ಚು ಕಲಾವಿದರಲ್ಲಿ ವಿವಿಧ ನಮೂನೆಯ ನೃತ್ಯವನ್ನು ಅಭ್ಯಾಸ ಮಾಡಿದರು. ನಂತರ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿ ತಾವು ಕಲಿತ ಕಲೆಯನ್ನು ಜಿಪಿಣತನವಿಲ್ಲದೇ ಕಲಿಸ ತೊಡಗಿದರು.
ಗುರುಗಳು ಮಹಾ ಸ್ಟ್ರಿಕ್ಟ್. ಕುಣಿತ ಮಾಡುವಾಗ ತಾಳ್ಮೆಯಿಂದ ಹೇಳಿ ಕೊಡುತ್ತಾರೆ. ಹತ್ತು ಬಾರಿ ಹೇಳಿಕೊಟ್ಟರೂ ಬರದಿದ್ದರೆ, ಅವರ ಕೈಲ್ಲಿರುವ ಬಿಲ್ಲು ಮಾತನಾಡುತ್ತದೆ. ಪೆಟ್ಟು ಗ್ಯಾರಂಟಿ. ಒಮ್ಮೆ ಇವರ ಹತ್ತಿರ ಕಲಿತರೆ ಕುಣಿತ ಮತ್ತೆ ಮರೆಯುದಿಲ್ಲ.
ಕಾರಂತರ ಒಡನಾಡಿಗಳಾಗಿ ಅವರ ರೂಪಕಗಳಿಗೆ ರೂಪವನ್ನು ನೀಡಿದ ಅನುಭವ ಇವರದ್ದು. ಉತ್ತಮ ನಿರ್ದೇಶಕ ಇವರು. ಹಲವಾರು ಯಕ್ಷಗಾನ ಪ್ರಸಂಗಗಳನ್ನು ಹೊಸ ಕಲ್ಪನೆಯಲ್ಲಿ ನಿರ್ದೇಶಿಸಿ ಯಶಸ್ವಿಯಾಗಿ ಪ್ರದರ್ಶನ ಗೊಂಡಿದೆ.
ಗುರುಗಳ ಶಿಷ್ಯಂದಿರ ಬಳಗದಲ್ಲಿ ವಕೀಲರು. ವೈದ್ಯರು, ವಿದೇಶೀಯರು ಎಲ್ಲರು ಇದ್ದಾರೆ. ಯಕ್ಷಗಾನವನ್ನು ಆರಾದನೆ ಎಂದು ತಿಳಿರುವ ಸಂಜೀವ ಗುರುಗಳಿಗೆ ಅವರ ಅಸಂಖ್ಯಾತ ಶಿಷ್ಯಂದಿರಲ್ಲಿ ಒಬ್ಬನಾದ ನನ್ನ ನುಡಿ ನಮನ.
Thursday, March 12, 2009
`ಗಜ ಮುಖದವಗೆ ಗಣಪತಿಗೆ' ಮೊದಲ ನಮನ.
`ಯಕ್ಷಗಾನ' ಎನ್ನುವ ಶಬ್ದವೇ ಕೇಳಿದಾಗ ಒಮ್ಮೆಲೆ ಉತ್ಸಾಹ ನನಗೆ ಬರುತ್ತದೆ. ಸಣ್ಣವನಿರುವಾಗಿನಿಂದ ಯಕ್ಷಗಾನ ಅಂದರೆ ಏನೋ ಖುಷಿ. ಮುಖಕ್ಕೆ ಮಸಿಕೆಂಡ( ಇದ್ದಿಲು) ಹಚ್ಚಿಕೊಂಡು ಕುಣಿದಿದ್ದೆ ಕುಣಿದಿದ್ದು. ಊರ ಸುತ್ತಲಿನ ಯಾವ ಬೆಟ್ಟಗುಡ್ಡವನ್ನು ಬಿಡಲಿಲ್ಲ. ಯಾರ ಮನೆಯ ಹಿತ್ತಿಲನ್ನು ಬಿಡಲಿಲ್ಲ. ನಾಲ್ಕು ಗೋಣಿ ಪಾಟು ಕಟ್ಟಿ ರಂಗಸ್ತಳ ಮಾಡಿ ಯಕ್ಷಗಾನವನ್ನು ಕುಣಿದು ದಣಿದಿದ್ದೇವು. ಚಿಟ್ಟಾಣಿ, ಜಳವಳ್ಳಿ, ಮಹಾಬಲ ಹೆಗಡೆ ಮುಂತಾದ ಕಲಾವಿದರು ನಮಗೆ ರೋಲ್ ಮಾಡೆಲ್. ಅಪರೂಪಕ್ಕೆ ಅವರ ಆಟ ನೋಡಿ, ಅವರನ್ನೇ ಅನುಕರಣೆ ಮಾಡುವ ಚಟವನ್ನು ಬೆಳೆಸಿಕೊಂಡಿದ್ದೇವು.
ನಾನು ಸರಿಯಾಗಿ ಆಟ ಕುಣಿಯಲು ಕಲಿತದ್ದು, ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ. ಗುರು ಸಂಜೀವರು ಗುರುಗಳು. ಕ್ಷಮೆ ಇರಲಿ ಸರಿಯಾಗಿ ಕುಣಿಯಲು ಅನ್ನುವುದಕ್ಕಿಂತ ಯಕ್ಷಗಾನವನ್ನು ತಿಳಿಯಲು ಕಲಿತದ್ದು ಎನ್ನಬಹುದು.
ಹುಟ್ಟು ಯಕ್ಷಗಾನದ ಚಟವನ್ನು ಬೆಳೆಸಿಕೊಂಡ ನಾನು ಇದರ ಬಗ್ಗೆ ಬರೆಯುವ ರೂಢಿಯನ್ನು ಮಾಡಿಕೊಂಡಿದ್ದೇನೆ. ಇಲ್ಲಿನ ವಿಚಾರಗಳನ್ನು ತುಂಬಲಿಕ್ಕೆ ಪ್ರಾರಂಭಿಸಿರುವುದೇ `ಒಡ್ಡೋಲಗ' ಬ್ಲಾಗ್. ನನ್ನ ಗುರುಗಳಾದ ಮತ್ತು ನನ್ನಂತ ಅನೇಕರಿಗೆ ಗುರುಗಳಾದ ಗುರು ಬನ್ನಂಜೆ ಸಂಜೀವ ಸುವರ್ಣರ ಬಗ್ಗೆ ಬರೆದು ಗುರುವಿಗೆ ಅಕ್ಷರ ಕಾಣಿಕೆಯನ್ನು ಮೊದಲ ಹೆಜ್ಜೆಯನ್ನು ಇಡುತ್ತೇನೆ.
ನಾನು ಸರಿಯಾಗಿ ಆಟ ಕುಣಿಯಲು ಕಲಿತದ್ದು, ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ. ಗುರು ಸಂಜೀವರು ಗುರುಗಳು. ಕ್ಷಮೆ ಇರಲಿ ಸರಿಯಾಗಿ ಕುಣಿಯಲು ಅನ್ನುವುದಕ್ಕಿಂತ ಯಕ್ಷಗಾನವನ್ನು ತಿಳಿಯಲು ಕಲಿತದ್ದು ಎನ್ನಬಹುದು.
ಹುಟ್ಟು ಯಕ್ಷಗಾನದ ಚಟವನ್ನು ಬೆಳೆಸಿಕೊಂಡ ನಾನು ಇದರ ಬಗ್ಗೆ ಬರೆಯುವ ರೂಢಿಯನ್ನು ಮಾಡಿಕೊಂಡಿದ್ದೇನೆ. ಇಲ್ಲಿನ ವಿಚಾರಗಳನ್ನು ತುಂಬಲಿಕ್ಕೆ ಪ್ರಾರಂಭಿಸಿರುವುದೇ `ಒಡ್ಡೋಲಗ' ಬ್ಲಾಗ್. ನನ್ನ ಗುರುಗಳಾದ ಮತ್ತು ನನ್ನಂತ ಅನೇಕರಿಗೆ ಗುರುಗಳಾದ ಗುರು ಬನ್ನಂಜೆ ಸಂಜೀವ ಸುವರ್ಣರ ಬಗ್ಗೆ ಬರೆದು ಗುರುವಿಗೆ ಅಕ್ಷರ ಕಾಣಿಕೆಯನ್ನು ಮೊದಲ ಹೆಜ್ಜೆಯನ್ನು ಇಡುತ್ತೇನೆ.
Subscribe to:
Posts (Atom)