
`ಉಡುಪಿ' ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಊರು. ಇಲ್ಲಿ ಕಲೆಗೆ ಅವಕಾಶ ಜಾಸ್ತಿ. ಕಲಿಯುವುದಕ್ಕೂ ಅವಕಾಶ ಇದೆ. ಯಕ್ಷಗಾನಕ್ಕೆ ಹೆಚ್ಚಿನ ಅವಕಾಶ ಇಲ್ಲಿ. ಯಕ್ಷಗಾನ ತರಬೇತಿ ನೀಡುವುದಕ್ಕೆ ಪ್ರಥಮವಾಗಿ ವ್ಯಸ್ಥಿತ ರೀತಿಯಲ್ಲಿ ಶಾಲೆಯೊಂದು ಪ್ರಾರಂಭವಾದದ್ದು ಇಲ್ಲಿಯೇ. ಹಿಂದ ಎಬಹಳಷ್ಟು ಮಂದಿ ಶ್ರೇಷ್ಠ ಗುರುಗಳು ಇಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯದಲ್ಲಿ `ಬನ್ನಂಜೆ ಸಂಜೀವ ಸುವರ್ಣ' ಇಲ್ಲಿ ನೃತ್ಯಗುರು.
ಯಕ್ಕಗಾನದ ನೃತ್ಯದ ಬಗ್ಗೆ ಇವರಷ್ಟು ಶಾಸ್ತ್ರೀಯವಾಗಿ ಪ್ರಯೋಗ ಮಾಡಿದವರು ಯಾರು ಇರಲಿಕ್ಕಿಲ್ಲ. ಗುರು ಸಂಜೀವರು ಉಡುಪಿಗೆ ತಾಗಿ ಕೊಂಡಿರುವ ಬನ್ನಂಜೆಯಲ್ಲಿ ಹುಟ್ಟಿದವರು. ನೆಲದ ಪ್ರಭಾವವಿರಬೇಕು. ಚಿಕ್ಕಂದಿನಿಂದಲೇ ಯಕ್ಷಗಾನದ ಆಸಕ್ತಿ. ಬಡತನದ ಅನಿವಾರ್ಯತೆ ಗ್ಯಾರಜ್ ಕೆಲಸಕ್ಕೆ ಹೋಗುವಂತೆ ಮಾಡಿತು. ಆದರೆ ಯಕ್ಷಗಾನದ ಚಟ ಇವರನ್ನು ರಾತ್ರಿ ಸಮಯದಲ್ಲಿ ಹೋಗಿ ಯಕ್ಷಗಾನವನ್ನು ಕಲಿಯುವಂತೆ ಮಾಡಿತು.
ಯಕ್ಷಗಾನವನ್ನು ಕಲಿತ ಮೇಲೆ ಎಲ್ಲರಂತೆ ಇವರು ಮೇಳ ಸೇರಿದರು. ಅನುಭವ ಸಾಲದು ಎನ್ನುವ ಮನೋಭಾವ ಬಂತೋ. ಅಥವಾ ಇವರಿಗಿರುವ ಕ್ರಿಯೇಟಿವಿಟಿ ಅಲ್ಲಿರಲು ಕೊಡಲಿಲ್ಲವೇನೋ?. ಮತ್ತೆ ಗುರುಗಳನ್ನು ಅರಸಿ ಹೊರಟರು. ಮುರ್ಗೋಳಿ ಗೋವಿಂದ ಶೇರುಗಾರ, ವೀರಭದ್ರ ನಾಯಕ ಮುಂತಾದ ಹದಿನಾರಕ್ಕೂ ಹೆಚ್ಚು ಕಲಾವಿದರಲ್ಲಿ ವಿವಿಧ ನಮೂನೆಯ ನೃತ್ಯವನ್ನು ಅಭ್ಯಾಸ ಮಾಡಿದರು. ನಂತರ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿ ತಾವು ಕಲಿತ ಕಲೆಯನ್ನು ಜಿಪಿಣತನವಿಲ್ಲದೇ ಕಲಿಸ ತೊಡಗಿದರು.
ಗುರುಗಳು ಮಹಾ ಸ್ಟ್ರಿಕ್ಟ್. ಕುಣಿತ ಮಾಡುವಾಗ ತಾಳ್ಮೆಯಿಂದ ಹೇಳಿ ಕೊಡುತ್ತಾರೆ. ಹತ್ತು ಬಾರಿ ಹೇಳಿಕೊಟ್ಟರೂ ಬರದಿದ್ದರೆ, ಅವರ ಕೈಲ್ಲಿರುವ ಬಿಲ್ಲು ಮಾತನಾಡುತ್ತದೆ. ಪೆಟ್ಟು ಗ್ಯಾರಂಟಿ. ಒಮ್ಮೆ ಇವರ ಹತ್ತಿರ ಕಲಿತರೆ ಕುಣಿತ ಮತ್ತೆ ಮರೆಯುದಿಲ್ಲ.
ಕಾರಂತರ ಒಡನಾಡಿಗಳಾಗಿ ಅವರ ರೂಪಕಗಳಿಗೆ ರೂಪವನ್ನು ನೀಡಿದ ಅನುಭವ ಇವರದ್ದು. ಉತ್ತಮ ನಿರ್ದೇಶಕ ಇವರು. ಹಲವಾರು ಯಕ್ಷಗಾನ ಪ್ರಸಂಗಗಳನ್ನು ಹೊಸ ಕಲ್ಪನೆಯಲ್ಲಿ ನಿರ್ದೇಶಿಸಿ ಯಶಸ್ವಿಯಾಗಿ ಪ್ರದರ್ಶನ ಗೊಂಡಿದೆ.
ಗುರುಗಳ ಶಿಷ್ಯಂದಿರ ಬಳಗದಲ್ಲಿ ವಕೀಲರು. ವೈದ್ಯರು, ವಿದೇಶೀಯರು ಎಲ್ಲರು ಇದ್ದಾರೆ. ಯಕ್ಷಗಾನವನ್ನು ಆರಾದನೆ ಎಂದು ತಿಳಿರುವ ಸಂಜೀವ ಗುರುಗಳಿಗೆ ಅವರ ಅಸಂಖ್ಯಾತ ಶಿಷ್ಯಂದಿರಲ್ಲಿ ಒಬ್ಬನಾದ ನನ್ನ ನುಡಿ ನಮನ.
ಯಕ್ಕಗಾನದ ನೃತ್ಯದ ಬಗ್ಗೆ ಇವರಷ್ಟು ಶಾಸ್ತ್ರೀಯವಾಗಿ ಪ್ರಯೋಗ ಮಾಡಿದವರು ಯಾರು ಇರಲಿಕ್ಕಿಲ್ಲ. ಗುರು ಸಂಜೀವರು ಉಡುಪಿಗೆ ತಾಗಿ ಕೊಂಡಿರುವ ಬನ್ನಂಜೆಯಲ್ಲಿ ಹುಟ್ಟಿದವರು. ನೆಲದ ಪ್ರಭಾವವಿರಬೇಕು. ಚಿಕ್ಕಂದಿನಿಂದಲೇ ಯಕ್ಷಗಾನದ ಆಸಕ್ತಿ. ಬಡತನದ ಅನಿವಾರ್ಯತೆ ಗ್ಯಾರಜ್ ಕೆಲಸಕ್ಕೆ ಹೋಗುವಂತೆ ಮಾಡಿತು. ಆದರೆ ಯಕ್ಷಗಾನದ ಚಟ ಇವರನ್ನು ರಾತ್ರಿ ಸಮಯದಲ್ಲಿ ಹೋಗಿ ಯಕ್ಷಗಾನವನ್ನು ಕಲಿಯುವಂತೆ ಮಾಡಿತು.
ಯಕ್ಷಗಾನವನ್ನು ಕಲಿತ ಮೇಲೆ ಎಲ್ಲರಂತೆ ಇವರು ಮೇಳ ಸೇರಿದರು. ಅನುಭವ ಸಾಲದು ಎನ್ನುವ ಮನೋಭಾವ ಬಂತೋ. ಅಥವಾ ಇವರಿಗಿರುವ ಕ್ರಿಯೇಟಿವಿಟಿ ಅಲ್ಲಿರಲು ಕೊಡಲಿಲ್ಲವೇನೋ?. ಮತ್ತೆ ಗುರುಗಳನ್ನು ಅರಸಿ ಹೊರಟರು. ಮುರ್ಗೋಳಿ ಗೋವಿಂದ ಶೇರುಗಾರ, ವೀರಭದ್ರ ನಾಯಕ ಮುಂತಾದ ಹದಿನಾರಕ್ಕೂ ಹೆಚ್ಚು ಕಲಾವಿದರಲ್ಲಿ ವಿವಿಧ ನಮೂನೆಯ ನೃತ್ಯವನ್ನು ಅಭ್ಯಾಸ ಮಾಡಿದರು. ನಂತರ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿ ತಾವು ಕಲಿತ ಕಲೆಯನ್ನು ಜಿಪಿಣತನವಿಲ್ಲದೇ ಕಲಿಸ ತೊಡಗಿದರು.
ಗುರುಗಳು ಮಹಾ ಸ್ಟ್ರಿಕ್ಟ್. ಕುಣಿತ ಮಾಡುವಾಗ ತಾಳ್ಮೆಯಿಂದ ಹೇಳಿ ಕೊಡುತ್ತಾರೆ. ಹತ್ತು ಬಾರಿ ಹೇಳಿಕೊಟ್ಟರೂ ಬರದಿದ್ದರೆ, ಅವರ ಕೈಲ್ಲಿರುವ ಬಿಲ್ಲು ಮಾತನಾಡುತ್ತದೆ. ಪೆಟ್ಟು ಗ್ಯಾರಂಟಿ. ಒಮ್ಮೆ ಇವರ ಹತ್ತಿರ ಕಲಿತರೆ ಕುಣಿತ ಮತ್ತೆ ಮರೆಯುದಿಲ್ಲ.
ಕಾರಂತರ ಒಡನಾಡಿಗಳಾಗಿ ಅವರ ರೂಪಕಗಳಿಗೆ ರೂಪವನ್ನು ನೀಡಿದ ಅನುಭವ ಇವರದ್ದು. ಉತ್ತಮ ನಿರ್ದೇಶಕ ಇವರು. ಹಲವಾರು ಯಕ್ಷಗಾನ ಪ್ರಸಂಗಗಳನ್ನು ಹೊಸ ಕಲ್ಪನೆಯಲ್ಲಿ ನಿರ್ದೇಶಿಸಿ ಯಶಸ್ವಿಯಾಗಿ ಪ್ರದರ್ಶನ ಗೊಂಡಿದೆ.
ಗುರುಗಳ ಶಿಷ್ಯಂದಿರ ಬಳಗದಲ್ಲಿ ವಕೀಲರು. ವೈದ್ಯರು, ವಿದೇಶೀಯರು ಎಲ್ಲರು ಇದ್ದಾರೆ. ಯಕ್ಷಗಾನವನ್ನು ಆರಾದನೆ ಎಂದು ತಿಳಿರುವ ಸಂಜೀವ ಗುರುಗಳಿಗೆ ಅವರ ಅಸಂಖ್ಯಾತ ಶಿಷ್ಯಂದಿರಲ್ಲಿ ಒಬ್ಬನಾದ ನನ್ನ ನುಡಿ ನಮನ.
This comment has been removed by the author.
ReplyDeleteA welcome addition to the world of blogs. I think this is the first blog in Kannada to focus exclusively on Yakshagana although there are a couple of other blogs which write on Yakshagana alongside other topics. Hope to seeing a lot in this blog with regular updates.
ReplyDelete