Sunday, May 3, 2009

ಯಕ್ಷಗಾನದ ಕೆಲವು ಹಾಸ್ಯ ಘಟನೆಗಳು


ಯಕ್ಷಗಾನ ಹಲವಾರು ವಿಷಯಕ್ಕಾಗಿ ಹಿಡಿಸುತ್ತದೆ. ಇಲ್ಲಿ ಬರುವ ಮಾತುಗಾರಿಗೆ ಬಹಳ ಸೃಜನಶಿಲವಾಗಿರುತ್ತದೆ, ಅಷ್ಟೇ ಹಾಸ್ಯ ಪ್ರಜ್ಞೆಯಿಂದ ಕೂಡಿರುತ್ತದೆ. ಇನ್ನೂ ಹಳ್ಳಿಯಲ್ಲಿ ನಡೆಯುವ ಯಕ್ಷಗಾನದಲ್ಲಿ ನಾಟಿ ಭಾಷೆಗಳು ಮಿಶ್ರಣವಾಗಿ ಗಮ್ಮತ್ತಾಗಿರುತ್ತದೆ. ಇಂತಹ ಗಮ್ಮತ್ತಾಗಿರುವ ಮಾತುಗಾರಿಕೆಯ ಕೆಲವು ತುಣುಕುಗಳು
ಬಂಗಾರ ನಾಯ್ಕರ ಕೌರ­ವನೂ ಸಿಐಡಿ ನಾಯಿಯೂ
ನಮ್ಮೂರ ಹತ್ತಿರ ಹಳಿ­ಯಾಳ ಎನ್ನುವ ಊರಿದೆ. ಆ ಊರಿ­ನಲ್ಲಿ ಬಂಗಾರ್ಯ ನಾಯ್ಕ ಎನ್ನುವ ಹಿರಿಯ ವ್ಯಕ್ತಿ­ಯೊ­ಬ್ಬ­ರಿ­ದ್ದಾರೆ. ಅವರು ಆ ಊರಿನ ಮಾರಿ ದೇವ­ಸ್ಥಾ­ನದ ಪೂಜಾ­ರಿಯು ಹೌದು. ಇವ­ರಿಗೆ ಯಕ್ಷ­ಗಾ­ನ­ದಲ್ಲಿ ಪಾತ್ರ ಮಾಡುವ ಚಟ ಜೋರು. ತಮ್ಮ ಮನೆಯ ಸಮಾ­ರಾಧಾ­ನೆ­ಯಲ್ಲಿ ಒಂದು ಯಕ್ಷ­ಗಾನ ಏರ್ಪ­ಡಿಸಿ ಅಲ್ಲಿ ತಾವೊಂದು ಮುಖ್ಯ ಪಾತ್ರ­ವನ್ನು ಮಾಡು­ತ್ತಿ­ದ್ದರು. ಸಾಮಾ­ನ್ಯ­ವಾಗಿ ಪ್ರತಿ­ವ­ರ್ಷವೂ ಗದಾ­ಯುದ್ಧ ಪ್ರಸಂ­ಗವೇ ಇರು­ತ್ತಿತ್ತು. ಕಾರ­ಣ­ವೆಂ­ದರೆ ಇವ­ರಿಗೆ ಕೌರ­ವನ ಪಾತ್ರ ಮಾಡು­ವು­ದ­ರಲ್ಲಿ ಬಹಳ ಆಸಕ್ತಿ. ಪ್ರತಿ ಬಾರಿಯೂ ಇದು ನನ್ನ 101ನೇ ಕೌರವ ಎನ್ನು­ತ್ತಿ­ದ್ದರು.
ಆಟ ಪ್ರಾರಂ­ಭ­ದಿಂ­ದಲೇ ಅಪ­ಭ್ರಂ­ಶ­ತೆಯು ಪ್ರಾರಂಭ. ‘ಕು­ರು­ರಾಯ ಅದ­ನೆಲ್ಲ ಕಂಡು ಸಂತಾ­ಪದಿ ತನ್ನೇಯ ಭಾಗ್ಯ­ವೆ­ನುತ’ ಎನ್ನುವ ಪದ್ಯ­ದೊಂ­ದಿಗೆ ಕೌರ­ವನ ಪ್ರವೇಶ ಎಲ್ಲಾ ಯಕ್ಷ­ಗಾ­ನ­ದಲ್ಲೂ ಆಗು­ತ್ತದೆ. ಆದರೆ ಬಂಗಾರ್ಯ ಅವರ ಕೌರ­ವನ ಪಾತ್ರ ಪ್ರವೇ­ಶ­ವಾ­ಗು­ವುದೇ ‘ಕು­ರು­ರಾಯ ಅದ­ನೆಲ್ಲ ಕಂಡು ಸಂತೋ­ಷದಿ’ ಎಂದು. ಅದಕ್ಕೆ ಕಾರ­ಣವು ಉಂಟುತೊಂ­ತ್ತೊಂ­ಬತ್ತು ಜನ ತಮ್ಮಂ­ದಿ­ರನ್ನು ಪಾಮ­ಡ­ವರು ಕೊಂದರು ತನ್ನನ್ನು ಮಾತ್ರ ಕೊಲ್ಲ­ಲಿಕ್ಕೆ ಆಗ­ಲಿ­ಲ್ಲ­ವಲ್ಲ ಎನ್ನು ಸಂತೋಷ. ಪ್ರೇಕ್ಷ­ಕರು ಚಪ್ಪಾಳೆ ಹೊಡೆ­ದಂತೆ ಕೌರ­ವನ ಕುಣಿ­ತವು ಜೋರಾಗಿ ಸಾಗು­ತ್ತಿತ್ತು. ಕೃಷ್ಣನ ಕಂಡಾಗ ಕೌರವ ಹೇಳುವ ಅರ್ಥವು ಅಷ್ಟೇ ಸೊಗಸು ಱ ಏನಾ ಕಪಟಿ ನೀನು ವಿದು­ರನ ಮನೆ ಕಡ­ವಾ­ರ­ದ­ಲೆಲ್ಲ ಹಾಲು ಹರ್ಸಿ­ಯಂತೆ ಹೌದನಾ. ಎಂದು ತನ್ನ ಲೋಕಲ್‌ ಲಾಂಗ್ವೇ­ಜ್‌­ನ­ಲ್ಲಿಯೇ ಅರ್ತ­ವನ್ನು ಹೇಳು­ವುದು ವಿಶೇಷ. ನೀರಿ­ನಲ್ಲಿ ಅಡ­ಗಿ­ರುವ ಕೌರ­ವ­ನನ್ನು ‘ಛೀಂ­ದ್ರ­ಪ­ಕುಲ ಕುನ್ನಿ’ ಎಂದು ಬೈದು ಕರೆ­ದಾಗ ನೀರಿಂದ ಮೇಲೆದ್ದು ಬಂದ ಕೌರವ ತಡ­ಮಾ­ಡದೇ ‘ನಾನು ಛೀಂದ್ರ­ಪ­ಕುಲ ಕುನ್ನಿ­ಯಾ­ದರೆ ನೀನೇನು ಸಿಐಡಿ ನಾಯನಾ’ಎಂದು ಇಂಗ್ಲಿಷ್‌ ಬಳಕೆ ಮಾಡಿ ಯಕ್ಷ­ಗಾ­ನದ ಕೊಲೆ­ಯಾ­ಗು­ತ್ತದೆ. ಆದರೆ ಇದು ಹಳ್ಳಿ ಆಟ­ವೆಂಬ ವಿನಾ­ಯತಿ ಇದ­ಕ್ಕಿ­ರು­ತ್ತದೆ.
ನಾರಾಯಣ ನಾಯ್ಕನ ಶನಿ
ಮಾದ್ಲಮನೆ ಎನ್ನುವ ಹಳ್ಳಿ ಅಲ್ಲೊಬ್ಬ ನಾರಾಯಣ ನಾಯ್ಕ ಎನ್ನುವವರಿದ್ದಾರೆ. ಅವರೊಬ್ಬ ಸ್ವಘೋಷಿತ ಸಾಮೀಜಿ. ಶನಿ ದೇವರು ಆರಾಧ್ಯ ದೈವ. ಅದಕ್ಕಾಗಿ ಪ್ರತಿ ವರ್ಷ ಶನಿ ಜಾತ್ರೆ ಮತ್ತು ಯಕ್ಷಗಾನ ವಿಶೇಷವಾಗಿ ಶನಿ ಮಹಾತ್ಮೆ ಯಕ್ಷಗಾನವನ್ನೇ ಆಡುತ್ತಾರೆ. ಶನಿಯ ಪಾತ್ರದಲ್ಲಿ ಸ್ವಾಮಿಯದ್ದೇ. ಇಲ್ಲಿ ಒಂದು ಗಮ್ಮತ್ತು. ಶನಿಗೆ ಬಣ್ಣ ಹಚ್ಚಿಯಾದ ತಕ್ಷಣದಲ್ಲೆ ರಂಗ ಪ್ರವೆಶವಾಗಬೇಕು. ರಂಗ ಬಂದ ಕೂಡಲೇ ಶನಿ ನಾರಾಯಣ ನಾಯ್ಕನ ಮೈಮೇಲೆ ಬರುತ್ತದೆ. ವಿಕ್ರಮನ ಪಾತ್ರಧಾರಿ ಮಾತೇ ಆಡಬಾರದು ಒನ್ನೊಮ್ಮೆ ಮಾತನಾಡಿದರೆ ಶನಿ ರೂಪದಲ್ಲಿರುವ ನಾರಾಯಣ ನಾಯ್ಕ ಕಡಿಯಲಿಕ್ಕೆ ಹೋರಡುತ್ತಾನೆ. ಒಮ್ಮ ವಿಕ್ರಮನ ಪಾತ್ರಧಾರಿ ಗದ್ದೆ ಬಯಲು ಬಿದ್ದು ಓಡಿಹೋಗಿ ಆಟವೇ ನಿಂತಿದೆ.
ಪಂಚವಲ್ಲಭೆ ಅಲ್ಲವೇ ನಾನು
ಇದೊಂದು ಹಳ್ಳಿಯಲ್ಲೇ ನಡೆದ ಘಟನೆ

ಕೀಚಕವಧೆ ಪ್ರಸಂಗ, ಈ ಪ್ರಸಂಗದ ಕೊನೆಯ ಸನ್ನಿವೇಶದಲ್ಲಿ ಸೈರೇಂದ್ರಿಯ(ದ್ರೌಪದಿ) ವೇಷದಲ್ಲಿ ಕೀಚಕ ಇದ್ದಲ್ಲಿಗೆ ಭೀಮ ಹೋಗುತ್ತಾನೆ. ಕೀಚಕ ಸೈರೇಂದ್ರಿಯೇ ಬಂದಳೆಂದು ತಿಳಿದು ಗಟ್ಟಿಯಾಗಿ ಅಪ್ಪಿ ಹಾಕಿಕೊಳ್ಳುತ್ತಾನೆ. ಕೀಚಕನಿಗೆ ಏನೋ ಅನುಮಾನ ಬಂದಂತಾಗಿ ಸೈರೇಂದ್ರಿ ನಿನ್ನ ಕುಚದ್ವಯಗಳೇ ಸಿಗುತ್ತಲ್ಲವಲ್ಲ? ಎಂದು ಅನುಮಾನ ವ್ಯಕ್ತ ಪಡಿಸುತ್ತಾನೆ. ಸೈರೇಂದ್ರಿಯ ವೇಶದಲ್ಲಿದ್ದ ಭೀಮ ಪಾತ್ರಧಾರಿ ತಕ್ಷಣ ಉತ್ತರಿಸಿದ ಕೀಚಕ ನನಗೆ ಐದು ಮಂದಿ ಗಂಡಂದಿರು ಎಂದು ನಿನಗೆ ತಿಳಿದಿಲ್ಲವೇ. ಮತ್ತೆ ಹೇಗೆ ಅದು ಸಿಗಲು ಸಾಧ್ಯ ಎಂದು
ಐದು ಗ್ರಾಮ ತಗೊಂಡು

ಕಂಚಿಕೈ ಊರಿನಲ್ಲಿ ಮಳೆಗಾಲ ಒಂದು ತಾಳ ಮದ್ದಲೆಯನ್ನು ಏರ್ಪಡಿಸುವುದು ಒಂದು ಸಂಪ್ರದಾಯವಾಗಿಯೇ ಬೆಳೆದು ಬಂದಿತ್ತು, ಕೈಂಚಿಕೈ ಹೆಗೆಡೆರು ಮುಖ್ಯ ಪಾತ್ರ ಹಾಕುವುದು ರೂಢಿಯಲ್ಲಿತ್ತು. ಅಂದು ಶ್ರೀಕೃಷ್ಣ ಸಂಧಾನ ಪ್ರಸಂಗ. ಕೈಂಚಿಕೈ ಹೆಗಡೆರ ಕೌರವ. ಕೃಷ್ಣ ಬಂದು ಕೇಳುತ್ತಾನೆ, ಕೌರವ ಪಾಂಡವರಿಗೆ ಐದು ರಾಜ್ಯದ ಬದಲು ಐದು ಗ್ರಾಮವನ್ನಾದರೂ ಕೊಡು ಎಂದು, ಊರಿನ ಹೆಂಗಸರೆಲ್ಲ ತಾಳ ಮದ್ದಲೆ ವಿಕ್ಷೀಸಲು ಮುಂದೆ ಕುಳಿತಿದ್ದರು. ಹೆಗೆಡೆರು ಒಂದು ಸೂಜಿ ಮನೆ ಜಾಗವನ್ನು ನೀಡುವುದಿಲ್ಲ ಹೇಳುವ ಬದಲು ಕೃಷ್ನ ಐದು ಗ್ರಾಮ ತಾನೆ ತೆಗೆದು ಕೊಂಡು ಹೋಗು ಎನ್ನುವುದಾಗಿ ಹೇಳಿ ಬಿಟ್ಟರು. ಯಾಕೆ ಹಿಗಂದ್ರಿ ಹೆಗಡೆರೆ ಎಂದು ಕೇಳಿದರೆ ತಾನು ಇಷ್ಟು ದೊಡ್ಡ ಮನುಷ್ಯ ಆಗಿ ಕೃಷ್ಣವ ಬರಿಗೈಯಲ್ಲಿ ಕಳಿಸುವ ಮನಸಾಗಲಿಲ್ಲ ಅಂದರಂತೆ.

3 comments:

  1. ಉದಯವಾಣಿ ಕಛೇರಿಯಲ್ಲಿ ಕುಳಿತೂ ಒಡ್ಡೋಲಗ ಆರಂಭಿಸಿದರಲ್ಲಾ.... ಭೇಷ್....

    ReplyDelete
  2. bhaari laayakkide

    ReplyDelete

Followers

FEEDJIT Live Traffic Feed