Thursday, May 21, 2009

ಹಿಂದೂಸ್ತಾನಿ ಗಾಯಕನಾಗಬೇಕಿತ್ತು...ಭಾಗವತನಾದೆ.







ಸುಬ್ರ­ಮಣ್ಯ ಧಾರೇ­ಶ್ವರ
ಯಕ್ಷ­ಗಾ­ನದ ಜನ­ಪ್ರಿಯ ಭಾಗ­ವತ



ನಾನು ಗೋಕ­ರ್ಣದ ಸಮು­ದ್ರದ ಅಂಚಿ­ನಲ್ಲಿ ಹುಟ್ಟಿ­ದವ. ನನ್ನ ಅಪ್ಪ ಲಕ್ಷ್ಮೀ­ನಾ­ರಾ­ಯಣ ಭಟ್ಟ, ಅಮ್ಮ ಲಕ್ಷ್ಮೀ. ನಾನು ಒಬ್ಬನೇ ಮಗ. ಚಿಕ್ಕಂ­ದಿ­ನಿಂ­ದಲೂ ನಾನು ಕಾಣು­ತ್ತಿ­ರುವ ಕನಸು ಒಂದೇ, ಹಿಂದೂ­ಸ್ತಾನಿ ಸಂಗೀ­ತ­ಗಾ­ರ­ನಾ­ಗ­ಬೇಕು ಎಂಬುದು.
ನನ್ನ ಚಿಕ್ಕಮ್ಮ ಸುಲೋ­ಚನಾ ಮಧ್ಯಸ್ಥ ಮತ್ತು ಮಾವ ನಾರಾ­ಯಣ ಮಧ್ಯಸ್ಥ ಸಂಗೀ­ತದ ಗುಂಗನ್ನು ಮೊದಲು ನನಗೆ ತುಂಬಿ­ದ­ವರು. `ಶರಣು ಸಿದ್ಧಿ­ವಿ­ನಾ­ಯಕ' ಮತ್ತು ಭೀಮ­ಸೇನ ಜೋಶಿ ಅವರ `ಮಾದೆ ಮಾಹೆರ ಪಂಡರಿ' ಈ ಪದ್ಯ­ಗಳು ನನಗೆ ಒಂದು ರೀತಿಯ ಹುಚ್ಚನ್ನೇ ಹಿಡಿ­ಸಿ­ದ್ದವು ಎಂದರೆ ತಪ್ಪಾ­ಗ­ಲಾ­ರದು.
ಒಮ್ಮೆ ಗೋಕ­ರ್ಣಕ್ಕೆ ಶ್ಯಾಮಲಾ ಭಾವೆ ಅವರು ಬಂದಾಗ ಅವರ ಹಿಂದೆಯೇ ಹೊರ­ಟ­ವನು ನಾನು. ಅದು ಮನೆ­ಯ­ವ­ರಿಗೆ ಗೊತ್ತಾಗಿ ಹೋಗಲು ಬಿಡ­ಲಿಲ್ಲ. `ಒಬ್ಬನೇ ಮಗ ಸಂಗೀತ ಕಲಿ­ತರೆ ಕೈಗೆ ಸಿಗ­ಲಾರ' ಎಂಬ ಕಾರ­ಣ­ದಿಂ­ದಲೋ ಎನೋ?..
ನನ್ನ ವಿದ್ಯಾ­ಭ್ಯಾ­ಸವು ಪ್ರಥಮ ಪಿಯು­ಸಿಗೆ ಮುಕ್ತಾ­ಯ­ಗೊಂ­ಡಿತು. ಆಮೇಲೆ ಹೊಟ್ಟೆ­ಪಾಡು. ಎಲೆ­ಕ್ಟ್ರಿಕ್‌ ಕೆಲಸ ಕಲಿತೆ. ಕರೆಂಟ್‌ ವಾಯ­ರಿಂಗ್‌ ಮಾಡು­ವುದು ನನ್ನ ಉದ್ಯೋ­ಗ­ವಾ­ಯಿತು. ಆವಾಗ ಅಪ­ರೂ­ಪ­ವಾದ ಮೈಕ್‌ ಸೆಟ್‌ ಇಟ್ಟು ನಾಟಕ, ಸಂಗೀತ ಕಾರ್ಯ­ಕ್ರ­ಮ­ಗ­ಳಿಗೆ ನೀಡ­ತೊ­ಡ­ಗಿದೆ. ಜೀವನ ಪೂರ್ತಿ ಲೈಟ್‌ ಕಂಬ ಹತ್ತು­ವು­ದ­ರ­ಲ್ಲಿಯೇ ಕಳೆ­ಯು­ತ್ತದೆ ಎಂದು­ಕೊಂ­ಡಿದ್ದೆ. ಆದರೆ ಹಾಗಾ­ಗ­ಲಿಲ್ಲ. ಯಕ್ಷ­ಗಾ­ನದ ಭಾಗ­ವ­ತ­ನಾದೆ. ನಾನು ಭಾಗ­ವತ ಆಗಿ­ರು­ವುದು ಒಂದು ಆಕ­ಸ್ಮಿಕ.
ಯಕ್ಷ­ಗಾ­ನದ ಮೇರು ಭಾಗ­ವತ ಉಪ್ಪೂರು ನಾರಾ­ಯಣ ಭಾಗ­ವ­ತರು ಹಾಗೂ ಸಣ್ಣ ವಯ­ಸ್ಸಿ­ನಲ್ಲೇ ಯಾರೂ ಮರೆ­ಯದ ಹೆಸ­ರನ್ನು ಮಾಡಿ ನೆನ­ಪಾ­ಗಿಯೇ ಉಳಿದ ದಿ. ಕಾಳಿಂಗ ನಾವು­ಡರು ಗೋಕ­ರ್ಣಕ್ಕೆ ಬಂದಿ­ದ್ದರು. ನನ್ನ ತಂದೆಗೂ ಅವ­ರಿಗೂ ಒಳ್ಳೆಯ ಸ್ನೇಹ­ವಿತ್ತು. ಉಪ್ಪೂ­ರರ ಹತ್ತಿರ ನನ್ನನ್ನು ತೋರಿಸಿ ಇವ­ನನ್ನು ದಾರಿಗೆ ತರುವ ಕೆಲಸ ನಿಮ್ಮದು ಎಂದು ಒಪ್ಪಿ­ಸಿ­ಬಿ­ಟ್ಟರು. ನಾನು ದಾರಿ ತಪ್ಪಿ­ರ­ಲಿಲ್ಲ ಅದು ಬೇರೆ ಮಾತು. ಅವರು ಹೇಳಿದ್ದು ನನ್ನ ಮೇಲಿನ ಕಾಳ­ಜಿ­ಯಿಂದ ಎನ್ನು­ವುದು ಸ್ಪಷ್ಟ.
ಸಂಗೀ­ತ­ಗಾ­ರ­ನಾ­ಗ­ಬೇ­ಕೆಂ­ದಿದ್ದ ನಾನು ಯಕ್ಷ­ಗಾ­ನದ ಭಾಗ­ವ­ತ­ನಾ­ಗ­ಬೇ­ಕಾದ ಸ್ಥಿತಿ ಬಂತು. ಮೊದ­ಲ­ನೆ­ಯ­ದಾಗಿ ನನಗೆ ಯಕ್ಷ­ಗಾ­ನ­ವೆಂ­ದರೆ ಅಷ್ಟ­ಕಷ್ಟೇ. ಅಂದರೆ ಗದಾ­ಯುದ್ಧ ಪ್ರಸಂ­ಗ­ವೆಂ­ದರೆ ಗದೆ­ಯಲ್ಲಿ ಹೊಡೆ­ದು­ಕೊ­ಳ್ಳು­ವುದು ಎನ್ನುವ ಕಲ್ಪನೆ ನನ್ನದು. ಆದರೆ ಎಂದು ಉಪ್ಪೂ­ರರ ಗರ­ಡಿಗೆ ಸೇರಿ­ದೆನೋ ಅಂದಿ­ನಿಂದ ನನ್ನ ಗತಿ ಬದ­ಲಾ­ಯಿತು. ಕನಸು ಮಾತ್ರ ಹಾಗೆಯೇ ಉಳಿ­ಯಿತು.
ದಿ. ಕಾಳಿಂಗ ನಾವುಡ, ಚಿಟ್ಟಾಣಿ ರಾಮ­ಚಂದ್ರ ಹೆಗಡೆ, ದಿ. ದುರ್ಗಪ್ಪ ಗುಡಿ­ಗಾ­ರರು ನನಗೆ ಉತ್ತಮ ಅವ­ಕಾ­ಶ­ಗ­ಳನ್ನು ನೀಡುತ್ತ ನನ್ನ ಬೆಳ­ವ­ಣಿ­ಗೆಗೆ ಕಾರ­ಣ­ರಾ­ದರು. ವಿಭಿ­ನ್ನ­ತೆ­ಯನ್ನು ಬಯ­ಸುವ ಮನಸ್ಸು ನನ್ನದು. ಹಾಗಾಗಿ ನಾನು ಆಡಿ­ಸುವ ಪ್ರಸಂ­ಗ­ಗ­ಳಲ್ಲಿ ಹೊಸ ಹೊಸ ಪ್ರಯೋ­ಗ­ಕಾ­ಣು­ವುದು ಸಹಜ. ಅದು ಯಶ­ಸ್ಸನ್ನು ಕಂಡಿತು. ಸಂಗೀ­ತ­ಗಾ­ರ­ನಾ­ಗುವ ಕನ­ಸನ್ನು ಇಟ್ಟು­ಕೊಂಡು ಯಕ್ಷ­ಗಾ­ನ­ದಲ್ಲೂ ಸಂಗೀ­ತದ ರುಚಿ­ಯನ್ನು ಕಾಣ­ತೊ­ಡ­ಗಿದೆ. ಹೃದ­ಯಕ್ಕೆ ಹತ್ತಿ­ರ­ವಿ­ರುವ ಪೌರಾ­ಣಿಕ ಪ್ರಸಂ­ಗ­ಗಳು ಅನಿ­ವಾ­ರ್ಯ­ವಾಗಿ ಕಡಿಮೆ ಆಗುತ್ತ ಬಂದವು. ಜನ ಬಯ­ಸುವ ಪ್ರಸಂ­ಗ­ಗ­ಳನ್ನು ನೀಡ­ಬೇ­ಕಾದ ಸ್ಥಿತಿ ನಿರ್ಮಾ­ಣ­ವಾ­ಯಿತು. ಸಾಮಾ­ಜಿಕ ಪ್ರಸಂ­ಗ­ಗಳು ಕಿಸೆಗೆ ಹತ್ತಿ­ರ­ವಾ­ಯಿತು. ನಾನು ಮಾಡಿದ ಪ್ರಯೋ­ಗ­ಗ­ಳನ್ನು ಜನ ಒಪ್ಪಿ­ಕೊಂ­ಡರು. ವಿಮ­ರ್ಶ­ಕರ ಪಾಲಿಗೆ ಸಹ್ಯ­ವಾ­ಗ­ಲಿಲ್ಲ ಎನ್ನ­ಬ­ಹುದು. ನಾನು ಯಕ್ಷ­ಗಾ­ನ­ದಲ್ಲಿ ಒಂದು ಹಂತಕ್ಕೆ ಬೆಳೆ­ದಿ­ದ್ದೇನೆ. ಆದರೆ ನನ್ನ ಕನಸು ನನ­ಸಾ­ಗದ ಕನ­ಸಾ­ಗಿಯೇ ಉಳಿ­ಯ­ತ್ತ­ದೆಯೇ ಎನ್ನುವ ಭಯವು ಪ್ರಾರಂ­ಭ­ವಾ­ಯಿತು.
ಜೀವ­ನ­ಕ್ಕೊ­ಸ್ಕರ ಕರೆಂಟ್‌ ಕೆಲಸ ಮಾಡಲು ಪ್ರಾರಂ­ಭಿ­ಸಿದೆ. ಆಕ­ಸ್ಮಿ­ಕ­ವಾ­ಗಿಯೇ ಯಕ್ಷ­ಗಾನ ರಂಗಕ್ಕೆ ಬಂದೆ. ಹೀಗೆ ಬಂದ ಕೆಲ­ಸ­ವನ್ನು ಅಚ್ಚು ಕಟ್ಟಾಗಿ ಮಾಡಿ­ರುವ ತೃಪ್ತಿ­ಯಿದೆ. ಸಂಗೀ­ತ­ಗಾ­ರ­ನಾ­ಗುವ ಕನ­ಸನ್ನು ಕನ­ಸಾಗಿ ಉಳಿ­ಸಿ­ಕೊ­ಳ್ಳ­ಬಾ­ರದು ಅದನ್ನು ಸಾಕಾರ ಮಾಡಿ­ಕೊ­ಳ್ಳ­ಬೇ­ಕೆಂಬ ಹಠ ನನ್ನಲ್ಲಿ ಇತ್ತು, ಈಗಲೂ ಇದೆ.
ಸಂಗೀ­ತ­ಗಾ­ರ­ನಾ­ಗು­ವು­ದೇನೋ ಸರಿ, ಕಲಿ­ಯು­ವುದು ಯಾರ ಹತ್ತಿರ ? ಎಂಬುದು ಸಮ­ಸ್ಯೆ­ಯಾ­ಯಿತು. ಕಳೆದ ವರ್ಷ ಶ್ಯಾಮಲಾ ಭಾವೆ ಅವರ ಶಿಷ್ಯ­ನಾಗಿ ಸಂಗೀತ ಕಲಿ­ಯಲು ಪ್ರಾರಂ­ಭಿ­ಸಿ­ದ್ದೇನೆ. ಈಗ ಮತ್ತೊಮ್ಮೆ ನನ್ನ ಕನ­ಸಿಗೆ ರೆಕ್ಕೆ­ಗಳು ಬಂದಿವೆ. ಜನ ಮೆಚ್ಚುವ ಹಿಂದೂ­ಸ್ತಾನಿ ಸಂಗೀ­ತ­ಗಾ­ರ­ನಾ­ಗು­ತ್ತೇನೋ ಬಿಡು­ತ್ತೇನೋ ಗೊತ್ತಿಲ್ಲ. ಕನಸು ಪೂರ್ಣ ನನ­ಸಾ­ಗ­ದಿ­ದ್ದರೂ ಆಸೆ ಈಡೇ­ರ­ಬ­ಹು­ದೆನೋ ಎಂದು ಅನ್ನಿ­ಸು­ತ್ತದೆ..


ನಿರೂ­ಪಣೆ: ನಾಗ­ರಾಜ ಮತ್ತಿ­ಗಾರ

3 comments:

  1. ನಾಗರಾಜ್,
    ಸುಬ್ರಮ್ಮಣ್ಯ ಧಾರೇಶ್ವರ ಅವರನ್ನು ನೆನಪಿಸಿದಾಗ ಅವರ ಕೆಲವು ಹಾಡುಗಳು ನೆನಪಾಗುತ್ತದೆ. 'ಪಂಚತಾರೆಯರು' ಕ್ಯಾಸೆಟ್ ನಲ್ಲಿ ಧಾರೇಶ್ವರ ಅವರ ಹಾಡುಗಳು ಭಿನ್ನವಾಗಿವೆ. ತಾವು ಕೇಳಿರಬಹುದು....

    ReplyDelete
  2. ಪತ್ರಿಕೆಯಲ್ಲಿ ನಿಮ್ಮ ಈ ಲೇಖನ ಅಂದೇ ಓದಿದ್ದೆ.ಇಂದು ಬ್ಲಾಗ್ ನಲ್ಲಿ ಧಾರೇಶ್ವರರ ಸುಂದರ ಚಿತ್ರದೊಂದಿಗೆ ಮತ್ತೊಮ್ಮೆ ಓದಿ ಖುಶಿಯಾಯಿತು.

    ReplyDelete
  3. are NAAGU maava:) olle blog nindu. enga entento byadade hoagiddu ella barita idya kavana haadu heli. ninna blog olle iddu.TANDACOOL andre yaaru gottagle. amele ella article oadta bandange neenu heli gota:)

    ReplyDelete

Followers

FEEDJIT Live Traffic Feed